ಸೂರ್ಯವಂಶ

Since a long time, I had a desire to pen down a poem and publish it on my blog.But , things didn’t turn out as I had expected it to be. So, this is the apt time for me to draft a poem in order to pay tribute to one of the greatest family in Indian history.

With Regards ,

Beerappa

ಸೂರ್ಯವಂಶ

ಶ್ರದ್ಧದೇವ ಮನುವಿನ ಪುತ್ರ ಈ ಇಕ್ಷ್ವಾಕು

ಸಕಲ ಕಲೆಯಲ್ಲಿ ಮೂಡಿಸಿದನಂತೆ ತನ್ನದೆ ಛಾಪು |

ಯುದ್ಧದಲ್ಲಿ ಮಾಡುತ್ತಿದ್ದ ದಾಳಿಯು ಕರಾರುವಾಕು

ಆದನಂತೆ ಅಧಿಪತಿಯು ಒಟ್ಟು ದಿಕ್ಕುಗಳು ನಾಲ್ಕು ||೧||

ರಾಜ ನಭಿಯ ಜೇಷ್ಠ ಪುತ್ರ ರಿಷಭನಾಥ

ಆದನು ಜೈನರಲ್ಲಿ ಮೊದಲನೆಯ ತೀರ್ಥಂಕರ ಈತ |

ಈತನ ಹಲವು ನಾಮಗಳಲ್ಲಿ ಒಂದು ಆದಿನಾಥ

ಮುಂದೆ, ಈತ ಆದನು ಬಡವ ಬಲ್ಲಿಗನಿಗೆ ನಾಥ ||೨||

ತ್ರೇತಾಯುಗದ ಅತ್ಯಂತ ಧರ್ಮ ನಿಷ್ಠ ರಾಜ ಅಂಬರೀಶ

ಪಟ್ಟವನ್ನೇರಿದ ಕೂಡಲೇ ಆದನು ಭುವನೇಶ |

ಈತನ ಏಕಾದಶಿಯ ಉಪವಾಸವು ಅತ್ಯಂತ ವಿಶೇಷ

ದುರ್ವಾಸರಿಂದ ಕಾಪಾಡಲು ಸುದರ್ಶನನು ಮಾಡಿದನು ಪ್ರವೇಶ ||೩||

ಕಾಳಿದಾಸನ ರಘುವಂಶದಲ್ಲಿ ಉಲ್ಲೇಖಿಸಿರುವ ನೃಪ ಶ್ರೇಷ್ಠ ದಿಲೀಪ

ಒಮ್ಮೆ ಸಂತಾನವಿಲ್ಲವೆಂದು ಆತನಿಗೆ ಕಾಡಿತು ವಿಲಾಪ |

ನಂದಿನಿಯನ್ನು ಕೊಲ್ಲುವೆನೆಂದು ವ್ಯಾಘ್ರ ಮಾಡಿತು ಪ್ರಲಾಪ

ದಿಲೀಪನು ವ್ಯಾಘ್ರದೊಂದಿಗೆ ಮಾಡಿದನು ಕಲಾಪ |

ತನ್ನ ಪ್ರಾಣವನ್ನೇ ಸ್ವೀಕಾರ ಮಾಡಿಕೋ ಎಂದ ಆ ಮಹಾನೃಪ

ಈತನ ಗುಣವನ್ನ ಮೆಚ್ಚಿ ನಂದಿನಿಯು ಕೊಟ್ಟಳು ವರದ ಆಲಾಪ ||೪||

ಮರ್ಯಾದೆಯಲ್ಲಿ ಪುರುಷೋತ್ತಮ ಆಗಿರುವನು ಶ್ರೀರಾಮಚಂದ್ರ

ಹಾಗೆಯೇ ಸತ್ಯ ನುಡಿಯುವುದರಲ್ಲಿ ಈ ಸತ್ಯ ಹರಿಶ್ಚಂದ್ರ |

ಈತನ ವಚನಗಳಿಗೆ ಸಾಕ್ಷಿಯಾದರಂತೆ ಸೂರ್ಯ ಹಾಗೂ ಚಂದ್ರ

ನಿಷ್ಠೆ ಹಾಗೂ ಧರ್ಮವನ್ನು ಮೆಚ್ಚಿದನಂತೆ ಸಾಕ್ಷಾತ್ ದೇವೇಂದ್ರ ||೫||

ಸೂರ್ಯವಂಶದ ಮೂವತೆಂಟನೆಯ ದೊರೆ ಅಜ

ಪಳಗಿಸುತಿದ್ದನಂತೆ ಮದವೇರಿದ ಗಜ |

ಪತ್ನಿವಿಯೋಗ ತಾಳಲಾರದೆ ತನಗೆ ತಾನೇ ಮಾಡಿಕೊಂಡನಂತೆ ವಜಾ

ತನ್ನ ಪುತ್ರ ದಶರಥನನ್ನು ನೇಮಿಸಿದನಂತೆ , ಆಗು ನೀ ಮುಂದಿನ ಮಹಾರಾಜ ||೬||

ಅಜೀತನಾಥನ ಕಿರಿಯ ಸಹೋದರ ಮಹಾರಾಜ ಸಗರ

ಆತನ ರಾಜಧಾನಿಯಾಗಿತ್ತು ಭವ್ಯವಾದ ವಿದರ್ಭ ನಗರ |

ಆಯೋದ್ಯೆಯದ ಸ್ಥಳಾಂತರಿಸಿದರು ತನ್ನ ಅಗರ

ತನ್ನ ಅಶ್ವಮೇಧಯಾಗದಿಂದ ಅಳುಕಿತು ಇಡಿ ಅಮರಾವತಿ ನಗರ ||೭||

ಪಿತೃಗಳಿಗೆ ಮೋಕ್ಷ ಕೊಡಿಸಿದ ಮಹಾನ್ ಧೀಮಂತ ಈ ಭಗೀರಥ

ತಪಸ್ಸಿಗೆ ಮೆಚ್ಚಿ ಗಂಗೆಯು ಪಾಲಿಸಿದಳು ಈತನ ರಥ |

ಧರೆಗಿಳಸಲು ಆಕೆಗೆ ತಪಸ್ಸಿನ ಮೂಲಕ ಮಾಡಿದನು ಮನವಿ

ಶಿವನ ಜಟೆಯಿಂದ ಧರೆಗಿಳಿದು ಬಂದಳು ಜಾಹ್ನವಿ ||೮||

ಸುದಕ್ಷಿಣೆ ದಿಲೀಪ ಸುತ ,ಚಕ್ರವರ್ತಿ ರಘು

ದಾನ ನೀಡುವುದರಲ್ಲಿ ಬೀರುತ್ತಿದ್ದನು ಉದಾರತೆಯ ನಗು |

ಭಂಡಾರ ಕ್ಷೀಣಿಸಿದ ಸಮಯದಲ್ಲಿ ಗುರುದಕ್ಷಿಣೆ ಪಡೆಯಲು ಬಂದನು ಕೌತ್ಸ

ರಘುವಿನ ಪರಾಕ್ರಮವನ್ನು ನೆನಪಿಸಿಕೊಂಡು,ಕನಕ ವೃಷ್ಠಿ ಹರಿಸಿದನು ವಿಷ್ರವ ವತ್ಸ ||೯||

ಅತಿರಥರಲ್ಲಿ ಮಹಾರಥಿ ಈ ದಶರಥ

ದಾನವರ ವಿರುದ್ಧ ಹೋರಾಡಲು ದೇವಲೋಕದ ಅತ್ತ ಹೊರಳಸಿದನು ತನ್ನ ರಥ |

ಅಯೋಧ್ಯೆಯಲ್ಲಿ ಒಮ್ಮೆ ಆಗಿತ್ತು ಭೀಕರ ಕ್ಷಾಮ

ಶನೇಶ್ವರನ ಕೃಪಾಕಟಾಕ್ಷದಿಂದ ನೋಡಿಕೊಂದನು ಪ್ರಜೆಗಳ ಕ್ಷೇಮ ||೧೦||

ತ್ರೇತಾಯುಗದಲ್ಲಿ ಆತನ ಹೆಸರು ಶ್ರೀರಾಮ

ದ್ವಾಪರಯುಗದಲ್ಲಿ ಆತನ ಹೆಸರು ಶ್ಯಾಮ |

ಆತನನ್ನು ಪ್ರೀತಿಯಿಂದ ಭಕ್ತರು ಕರೆಯುತ್ತಿದ್ದರು ರಾಘವ ಎಂಬ ನಾಮ

ಹಲವಾರು ರಾಕ್ಷಸರನ್ನು ಸಂಹರಿಸಿದನು ಆ ಅವತಾರದಲ್ಲಿ ಸಾಕ್ಷಾತ್ ಪರಂಧಾಮ ||೧೧||

ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠವಾದ ವಂಶ ಈ ಸೂರ್ಯವಂಶ

ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬ ರಾಜನಲ್ಲಿತ್ತು ದೇವಾಂಶ |

ಪ್ರತಿಯೊಬ್ಬ ರಾಜನಲ್ಲಿತ್ತು ತನ್ನದೆಯಾದಂತಹ ವಿಶ್ಲೇಷಣಾ ಅಂಶ

ಇದೆ ನನ್ನ ಕಾವ್ಯದ ಅತ್ಯುನ್ನತ ಸಾರಾಂಶ ||೧೨||

                                                                                                -ಭಾಸ್ಕರ

https://www.facebook.com/beerappa.r.naik

Published by Beerappa Ramakrishna

Civil Engineer|Polyglot|Southpaw|Cricket Geek|Poet|

15 thoughts on “ಸೂರ್ಯವಂಶ

Leave a reply to Beerappa Ramakrishna Cancel reply

Design a site like this with WordPress.com
Get started